ವಿಚ್ಛೇದನಕ್ಕೆ ಮೊದಲು ತಿಳಿಯಬೇಕಾದ 7 ಸತ್ಯಗಳು – ಬಹುತೇಕ ಜನರಿಗೆ ಗೊತ್ತಿಲ್ಲ!

ಇಮೇಜ್
                                                            ವಿಚ್ಛೇದನದ ಭಾವನಾತ್ಮಕ ಕ್ಷಣ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೨೮.೦೩.೨೦೨೬. " ವಿಚ್ಛೇದನ ನಿರ್ವಹಣೆ : 10 ಪ್ರಮುಖ ಮಾರ್ಗಗಳು ಜೀವನವನ್ನು ಪುನರ್ ನಿರ್ಮಿಸಲು "                                          ವಿಚ್ಛೇದನ ನಿರ್ವಹಣೆ!! ವಿವಾಹ ಬಂಧನವು ಮಾನವನ ಜೀವನದಲ್ಲಿ ಮಹತ್ವದ ಸಂಬಂಧವಾಗಿದ್ದು, ಪ್ರೀತಿ, ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ನಿರ್ಮಿತವಾಗಿದೆ. ಆಗಿದ್ದಾಗ್ಯೂ ಕೆಲವು ಸಂದರ್ಭಗಳಲ್ಲಿ ದಾಂಪತ್ಯ ಜೀವನದಲ್ಲಿ ಅಸಮ್ಮತಿ, ಭಿನ್ನಾಭಿಪ್ರಾಯಗಳು ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ವಿಚ್ಛೇದನ ಅನಿವಾರ್ಯವಾಗಬಹುದು. ವಿಚ್ಛೇದನವು ಕೇವಲ ಕಾನೂನು ಪ್ರಕ್ರಿಯೆಯಷ್ಟೇ ಅಲ್ಲ, ಅದು ಭಾವನಾತ್ಮಕ ಮತ್ತು ಸಾಮಾಜಿಕವಾಗಿ ಸಂಕೀರ್ಣವಾದ ಹಂತವಾಗಿದೆ. ಆದ್ದರಿಂದ ವಿಚ್ಛೇದನ ನಿರ್ವಹಣೆ ಎಂದರೆ ಕಾನೂನು ನಿಯಮಗಳನ್ನನುಸರಿಸುವುದು ಮಾತ್ರವಲ್ಲ, ವ್ಯಕ್ತಿಯ ಮಾನಸಿಕ ಸ್ಥೈರ್ಯ, ಕುಟುಂಬದ ಬೆಂಬಲ ಮತ್ತು ಜೀವನ ಭವಿಷ್ಯದ ಪುನರ್‌ ನಿರ್ಮಾಣ...

🌸 "ಹರೆಯದ ಪ್ರೀತಿಯು ಹುಡುಗಾಟವಲ್ಲ, ಅದು ಬದುಕಿನ ಆಧಾರವನ್ನೇ ರೂಪಿಸುವ ಮೊದಲ ಹಂತ."

 


ಮಳೆಯೂ ಮಲ್ಲಿಗೆಯೂ ಕೂಡಿರುವ ನಗರದಲ್ಲಿ
ರಾಹುಲ್ ಮತ್ತು ಮಾಯಾಳ ಪ್ರೇಮಕಥೆ

ಬೆಂಗಳೂರುಉದ್ಯಾನವನಗಳ ನಗರ, ಮೋಡದಲ್ಲಿ ಮೂಡಿದ ಮಾನ್‌ಸೂನುಗಳು, ಘಮ ಘಮ  ಫಿಲ್ಟರ್ ಕಾಫಿ, ಮತ್ತು ಅನಿರೀಕ್ಷಿತ ಪ್ರೇಮಕಥೆಗಳ ಸ್ಥಳ.

ಕಿಕ್ಕಿರಿದ ವಾಹನಗಳಿಂದ ತುಂಬಿದ ಟ್ರಾಫಿಕ್‌  ಮತ್ತು ಬೂಗೈನ್ವಿಲಿಯಂತಹ ಹೂವಿನಿಂದ ಆವರಿಸಿರುವ ಶಾಂತ ಬೀದಿಗಳ ನಡುವೆ, ಎರಡು ಹೃದಯಗಳು ಒಂದಾಗಬೇಕೆಂದು ವಿಧಿ ನಿಶ್ಚಯಿಸಿತ್ತುರಾಹುಲ್ ಮತ್ತು ಮಾಯಾ, ಇಬ್ಬರೂ ನಗರದ ಹೃದಯದಲ್ಲಿರುವ ಹೆಸರಾಂತ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು.

ರಾಹುಲ್ ಮೈಸೂರಿನಿಂದ ಬಂದವನಾಗಿದ್ದು, ಶಾಂತ ಮತ್ತು ಇತರ ವ್ಯಕ್ತಿಗಳೊಂದಿಗೆ ಕರುಣೆಯುಳ್ಳ ವ್ಯಕ್ತಿ.  ಸಂಜೆ ಸಮಯದಲ್ಲಿ  ಚಹಾ ಕುಡಿಯುತ್ತಾ  ಕೋಡಿಂಗ್ ಮಾಡುವುದೆಂದರೆ  ಅವನಿಗೆ ತುಂಬಾ ಇಷ್ಟ.

ಮಾಯಾ ಮಂಗಳೂರು ಮೂಲದವಳುತೀಕ್ಷ್ಣ, ಆತ್ಮವಿಶ್ವಾಸದಿಂದ ಕೂಡಿದ್ದ ವ್ಯಕ್ತಿತ್ವ, ಮತ್ತು ಜೀವನದ ಬಗ್ಗೆ ಅತಿ  ಉತ್ಸಾಹವನ್ನು ಹೊಂದಿದ್ದವಳು. ಅವಳ ನಗೆಯು ದೂರದ ಹಾಲ್ ವರೆಗೆ ಕೇಳಿಸುತಿತ್ತು ಮತ್ತು ಅವಳ ಕಣ್ಣುಗಳು ಮಾತಾಡದ ಮಾತುಗಳನ್ನು ಹೇಳುತ್ತಿದ್ದವು.

 ಅಂದು ಕಾಲೇಜಿನ ಮೊದಲ ದಿನ. ರಾಹುಲ್ ಹಿಂದಿನ ಸಾಲಿನಲ್ಲಿ ಹೊಸದಾದ  ಪಠ್ಯಪುಸ್ತಕವನ್ನು ತಿರುಗಿಸುತ್ತ ಕುಳಿತಿದ್ದ. ಆಗ ಮಾಯಾ ಸ್ವಲ್ಪ ತಡವಾಗಿ, ಆತುರಾತುರವಾಗಿ  ಮತ್ತು ಸಂಪೂರ್ಣವಾಗಿ ಆಕರ್ಷಕವಾಗಿ ಒಳಬಂದಳು. ಅವಳ ಪೆನ್ ನೇರವಾಗಿ ರಾಹುಲ್ ಹತ್ತಿರ ಬಿದ್ದುಹೋಯಿತು. ರಾಹುಲ್ ಅದನ್ನು ಎತ್ತಲು ಮುಂದೆ ಬಗ್ಗಿದಾಗ ಅದೇ ಸಮಯದಲ್ಲಿ ಮಾಯಾ ಪೆನ್‌ ಅನ್ನು ಎತ್ತಿಕೊಂಡಿದ್ದಳು, ಅದೇ ಮೊದಲ ಸಲ ಇಬ್ಬರು ಒಬ್ಬರನ್ನೊಬ್ಬರು ನೋಡಿಕೊಂಡಿದ್ದರು , ಆಗ  ಆ ನಾಲ್ಕು  ಕಣ್ಣುಗಳು  ಮೊದಲ ಬಾರಿಗೆ ಮಾತನಾಡಿಕೊಂಡಿದ್ದವು.

ಧನ್ಯವಾದಗಳು,” ಎಂದಳು ಅವಳು, ಒಂದು ನಗು ಚೆಲ್ಲುತ್ತಾ….. ಅದು ರಾಹುಲ್ ಮನಸ್ಸಿನಲ್ಲಿ  ಬಡಿತದ ದಿಕ್ಕನ್ನೆ ಬದಲಾಯಿಸಿತು. ಒಂದು ನಗುವಿನಿಂದ ಪರಿಚಯ ಪ್ರಾರಂಭವಾಗಿ, ಸ್ನೇಹದ ಪರಿಧಿಯಿತ್ತ ವಾಲಿತು.

ಪ್ರಾರಂಭದಲ್ಲಿ ಅವರು ಕೇವಲ ಸಹಪಾಠಿಗಳಾಗಿದ್ದರು. ಆದರೆ ಎಲ್ಲ  ಹರೆಯದ ಹುಡುಗರಲ್ಲಿ  ಸಾಮಾನ್ಯವಾಗಿ ನಡೆಯುವ ಪ್ರೇಮಕಥೆಗಳಲ್ಲಿನಂತೆ, ವಿಧಿಯು ಅವರನ್ನು ಒಂದೇ ಪ್ರಾಜೆಕ್ಟು, ಒಂದೇ ಗುಂಪು, ಒಂದೇ ಬಸ್ನಲ್ಲಿ ಕರೆತಂದಿತು.

 ಕಾಲೇಜು ಬಿಟ್ಟ ಸಮಯದಲ್ಲಿ ಒಂದು ದಿನ, ಬೆಂಗಳೂರನ್ನೇ  ಸೆರೆಹಿಡಿಯುವಂತಹ  ಜೋರು  ಮಳೆ ಬಂತು. ಮಾಯಾ ಬಳಿ ಛತ್ರಿ ಇರಲಿಲ್ಲ, ಗೇಟ್‌ ಬಳಿ  ನಿಂತಿದ್ದ ರಾಹುಲ್,  ತನ್ನದೇ  ಶಾಂತ ಶೈಲಿಯಲ್ಲಿ, ತನ್ನ ಛತ್ರಿಯನ್ನು  ನಿಧಾನವಾಗಿ ಮಾಯಾಳ ಬಳಿಗೆ ಹಿಡಿದು ಜೊತೆಯಲ್ಲಿಯೇ ನಿಂತ.  ಆಮೇಲೆ  ಮಾಯಾ ರಾಹುಲ್‌ ನೊಂದಿಗೆ ಏನೊಂದು ಮಾತನಾಡದೇ ಸುಮ್ಮನೇ ಹೆಜ್ಜೆ ಹಾಕಿದಳು.

ಕಿರಿದಾದ ಕಪ್ಪು ಛತ್ರಿಯಡಿಯಲ್ಲಿ, ಮಳೆಯ ಹನಿಗಳು ಮುದ್ದಾದ ಉಡಾವಣೆಗಳಂತೆ ಬೀಳುತ್ತಿದ್ದಾಗ, ಮತ್ತು ನೆನೆಯುತ್ತಿರುವ  ಮಣ್ಣಿನ ಸುವಾಸನೆಯೂ ಇಬ್ಬರನ್ನೂ  ಹರಡುತ್ತಿದ್ದಾಗ, ಅವರ ನಡುವೆ ಏನೋ ಹೇಳಲಾಗದಂತಹ ಬಾವ, ಮುಟ್ಟಿಯೂ ಅಂಟದಂತಹ ಆ ಮೃದು  ಸ್ಪರ್ಶ.

ಅದರಿಂದಲೇ ಅವರು ಹಿಂದಿಗಿಂತಲೂ ಆಳವಾಗಿ ಬೆಸೆದುಹೋದರು.

ಇಬ್ಬರೂ  ಗ್ರಂಥಾಲಯದಲ್ಲಿ ಸೇರಿ ಓದುತ್ತಿದ್ದರು, ಚಿಕ್ಕ ಚಿಕ್ಕ  ವಿಷಯಗಳಲ್ಲಿ ಜಗಳವಾಡುತ್ತಿದ್ದರು, ಮತ್ತು ಕಾಲೇಜು ಕಾಂಟೀನ್ನಲ್ಲಿ ದೋಸೆ ಹಂಚಿಕೊಳ್ಳುತ್ತಿದ್ದರು. ರಾಹುಲ್ ಬೋರಿಂಗ್‌  ಲೆಕ್ಚರ್ಗಳಲ್ಲಿ ಮಾಯಾಗೆ ಅವಳಿಗೆ ಇಷ್ಟವಾದ ಡಾರ್ಕ್ ಚಾಕೊಲೆಟ್ ತಂದುಕೊಡುತ್ತಿದ್ದ. ಅವಳು ರಾತ್ರಿ 2 ಗಂಟೆಗೆ ರಾಹುಲ್ ಡೀಬಗ್ಗಿಂಗ್ ಸಮಯದಲ್ಲಿ ಮಿಮ್ಸ್ ಕಳುಹಿಸುತ್ತಿದ್ದಳು.

ಆದರೆ ಇದು ಕೇವಲ ಹಾಸ್ಯಕ್ಕೆ ಜೊತೆಯಾದ  ಪ್ರೇಮವಲ್ಲ.  ಬದಲಿಗೆ ಇಬ್ಬರು ಒಬ್ಬರಿಗೊಬ್ಬರು  ಪರಾಜಯ, ಒತ್ತಡ ಮತ್ತು ಮತ್ತು ತಮ್ಮ  ಗುರಿ ಸಾಧನೆಗಳಲ್ಲಿ ಪರಸ್ಪರ ಬೆಂಬಲವಾಗಿದ್ದರು. ಮಾಯಾಗೆ ತನ್ನ  ಕನಸಿನ ಇಂಟರ್ನ್ಶಿಪ್  ತಪ್ಪಿದ ಸಮಯದಲ್ಲಿ ರಾಹುಲ್ ಅವಳಿಗೆ ಬೆಂಬಲವಾಗಿ ಇದ್ದನು.

 ರಾಹುಲ್ ತನ್ನ ತಾತನನ್ನು ಕಳೆದುಕೊಂಡಾಗ, ಮಾಯಾ ಅವನ ಕೈ ಹಿಡಿದು ಸಂತೈಸಿದ್ದಳು. ಅವರ ಸಂಬಂಧವು ಕೇವಲ ನಗುವಿನಲ್ಲಿ ಅಲ್ಲದೇ, ಮೌನದಲ್ಲಿಯೂ ಬೆಳೆದಿತ್ತುಶಬ್ದಕ್ಕಿಂತ ಜಾಸ್ತಿ ಹೇಳುವ ಮೌನ.

ಒಂದು ಸಂಜೆ, ಕಾಲೇಜು ಉತ್ಸವದ ಸಮಯದಲ್ಲಿ, ರಾಹುಲ್ ತನ್ನಲ್ಲಿದ್ದ  ಧೈರ್ಯವನ್ನು  ಒಂದುಗೂಡಿಸಿ ಸಿದ್ದವಾದನು. ಅವನು ಫ್ಯಾಂಟಸಿ ಅದ್ಭುತಗಳನ್ನು ನಂಬದವನು,,,,, ಆದರೆ ರಾತ್ರಿ, ಮಾಯಾ ಆಕಾಶ ಬಣ್ಣದ ನೀಲಿ ಸಲವಾರ್ನಲ್ಲಿ ಅವನ ಬಳಿ ಬಂದಾಗ , ಫೆರಿ ಲೈಟ್ಸ್ಗಳ ಕೆಳಗೆ ಅವಳನ್ನು ಕಂಡ ಆ ಕ್ಷಣದಲ್ಲಿ ಮಿತಿಮೀರಿದ  ಹೃದಯದ ಬಡಿತ………. ಆ ಹೃದಯದ ಮಾತನ್ನು ಮಾತ್ರವೇ ಕೇಳುತ್ತಾ ಕಣ್ಣಲ್ಲಿ ಕಣ್ಣಿಟ್ಟು   ಆಕೆನ್ನು ಆಮ್ಫಿತಿಯೇಟರ್ ನ ಮೆಟ್ಟಿಲುಗಳು ಇರುವೆಡೆ  ಕರೆದುಕೊಂಡು ಹೋದನು.

 ಮಂಡಿಯೂರಿ ಕುಳಿತು ಮಾಯಾ,” ಎಂದು ತಲೆಯೆತ್ತಿ  ಹೇಳಿದನು, “ನಾನು fancy ಮಾತುಗಳನ್ನೂ, ದೊಡ್ಡ  ಅದ್ಬುತಗಳನ್ನು ಬಲ್ಲವನು ಅಲ್ಲ. ಆದರೆ ನನ್ನ ಹೃದಯ ಹೇಳುವುದು ಇದನ್ನು ಮಾತ್ರವೇನಾನು ನಿನ್ನ ನೋಡಿದರೆ ನನಗೆ  ಸಾಕಷ್ಟು ಸಂತೋಷ ಸಿಗುತ್ತದೆ. ನೀನು ನನ್ನೊಂದಿಗೆ ಇದ್ದರೆ  ನೆಮ್ಮದಿಗೆ ಬರವಿಲ್ಲ. ಉಸುರಿರೋವರೆಗೂ ನಿನ್ನೋಂದಿಗೆ ಪಯಣಿಸಬೇಕು,  ನೀನು... ನನ್ನವಳಾಗುತ್ತೀಯಾ?”

ಮಾಯಾ ಕಣ್ಣು ತೆರೆದು, ನಗುತ್ತಾ ಉತ್ತರಿಸಿದಳುಮೌನದಂತೆ ಸ್ಪರ್ಶಿಸುವ ಆ ನಗು.

ನೀನು ಕೇಳ್ತೀಯೋ ಇಲ್ಲವೋ  ಅನ್ನೋದು ನನಗೆ ಸಂಶಯವಾಗಿತ್ತು,” ಎಂದಳು ಅವಳ ತಲೆಯನ್ನು ಅವನ ಭುಜದ ಮೇಲೆ ಇಟ್ಟುಕೊಂಡು.

ಅವನಿಂದ ಅವಳು, ಅವಳಿಂದ ಅವನುಕಾಲೇಜಿನಲ್ಲಷ್ಟೆ ಅಲ್ಲ, ಎಲ್ಲೆಡೆ. ಚರ್ಚ್ ಸ್ಟ್ರೀಟ್ ರಾತ್ರಿ ನಡೆಯುವ ಸುತ್ತಾಟಗಳಿಂದ ಪ್ರಾರಂಭಿಸಿ, ಕನಸುಗಳು ಮತ್ತು ಭಯಗಳ ಬಗ್ಗೆ ನಡೆಯುವ ಸಂಭಾಷಣೆಗಳವರೆಗೆ, ಅವರು ತಮ್ಮದೇ ಆದ ಪ್ರಪಂಚವನ್ನೇ ಕಟ್ಟಿಕೊಂಡರು.

ಕಾಲೇಜಿನ ನಂತರ ಜೀವನ  ಬಹು ವೇಗಗತಿಯಲ್ಲಿ ಚಲಿಸಿತು. ರಾಹುಲ್ ಹೈದ್ರಾಬಾದಿನಲ್ಲಿ ಕೆಲಸ ಶುರುಮಾಡಿದನು. ಮಾಯಾ ಬೆಂಗಳೂರಿನಲ್ಲಿ ಉಳಿದಳು. ದೂರದ ಸಂಬಂಧ ಸುಲಭವಲ್ಲ. ಕೆಲ ದಿನಗಳಲ್ಲಿ ಜಗಳ, ಕೆಲ ದಿನಗಳಲ್ಲಿ ತುಂಬಾ ಮಿಸ್ ಮಾಡಿಕೊಳ್ಳುವುದು, ಆದರೆ ಅವರು ಎಂದಿಗೂ  ತಮ್ಮೊಡನಿದ್ದ ಪ್ರೀತಿಯನ್ನು ಬಿಟ್ಟು ಬಿಡಲಿಲ್ಲ. ಪ್ರತಿ ತಿಂಗಳಿಗೊಮ್ಮೆ , ರಾಹುಲ್ ರಾತ್ರಿ ಬಸ್ಸಿನಲ್ಲಿ ಬೆಂಗಳೂರಿಗೆ ಬರುತ್ತಿದ್ದನು ತನ್ನವಳೊಂದಿಗಿನ ಕೆಲ ಗಂಟೆಗಳ ಭೇಟಿಗೆ ಸಹ.

ಒಂದು ದಿನ, ಭಾನುವಾರದ ಸದ್ದುಗದ್ದಲವಿಲ್ಲದ  ಬೆಳಿಗ್ಗೆ, ರಾಹುಲ್ ಮಾಯಾನನ್ನು ಲಾಲ್ಬಾಗ್ ನಲ್ಲಿರುವ ಬೋಟಾನಿಕಲ್ ಗಾರ್ಡನ್ಗೆ ಕರೆದುಕೊಂಡು ಹೋದನುಅವಳಿಗೆ ಅತಿಯಾಗಿ ಇಷ್ಟವಾದ ಸ್ಥಳ. ಅವನ ಜೇಬಿನಲ್ಲಿ ಬಾಕ್ಸ್ನಲ್ಲಿ ಅಚ್ಚಾಗಿ ಕುಳಿತಿದ್ದ  ಒಂದು ಚಿಕ್ಕ ಉಂಗುರ,  ಅಂಗೈ ತಂಪಾಗಿ, ಹೃದಯ ವೈವಾ ಎಕ್ಸಾಮ್‌ ನ ಸಮಯದಂತೆ ಬಡಿಯುತ್ತಿತ್ತು.

ಕೆರೆ ಹತ್ತಿರದಲ್ಲಿ  ನಿಂತು, ಲೋಟಸ್ ಹೂಗಳು ಕೆರೆಯಲ್ಲಿ ಆಕಾಶದಲ್ಲಿ ಮಿನುಗುವ  ಚುಕ್ಕಿಗಳಂತೆ  ಅರಳಿ ನಿಂತಿದ್ದವು , ಮಕ್ಕಳು ಅಲ್ಲಲ್ಲಿ ಆಡುತ್ತಿದ್ದರು, ರಾಹುಲ್ ತನ್ನ  ಒಂದು ಮೊಣಕಾಲಿನಿಂದ ಮಂಡಿಯೂರಿ ಕುಳಿತು,….. .

ನಿನ್ನನ್ನು ಕಿಸ್ಮತ್ತಿನಿಂದ ಭೇಟಿಯಾದೆ. ನೀನು  ಆವರಿಸಿಕೊಂಡದ್ದು ನನ್ನ ಆಯ್ಕೆ. ಇವತ್ತಿನಿಂದ, ನಿನ್ನನ್ನು ಪ್ರತಿದಿನವೂ ಆಧರಿಸುವೆ. ನನ್ನನ್ನು  ಮದುವೆ ಆಗ್ತೀಯಾ ಮಾಯಾ?”

ಮಾಯಾಳ ಕಣ್ಣುಗಳಿಂದ ಕಣ್ಣೀರು ಹರಿಯುತ್ತಿತ್ತು, ಆದರೆ ನಗು ಸ್ಥಿರವಾಗಿತ್ತು.

ಹೌದು, ನೂರಾರು ಬಾರಿ ಹೌದು ಹೌದು,” ಎಂದಳು ಅವಳು.

ಅವರ ಮದುವೆಯ ಆಚರಣೆಯು ಬಹಳ ದೊಡ್ಡದಾಗಿರಲಿಲ್ಲ, ಆದರೆ ಅದ್ಭುತವಾಗಿತ್ತು. ಬೆಂಗಳೂರಿನ ಒಂದು ಪುಟ್ಟ ತೋಟದಲ್ಲಿ, ಸ್ನೇಹಿತರು ಮತ್ತು ಕುಟುಂಬದವರ ಮಧ್ಯೆ, ಮಲ್ಲಿಗೆ ಹಾರಗಳು, ಮತ್ತು ಪುಟ್ಟ ತುಂತುರು ಮಳೆ ಅವರ ಪ್ರತಿಜ್ಞೆಗಳಿಗೆ ಆಶೀರ್ವಾದ ನೀಡಿದವು. ಮಾಯಾ ಸರಳವಾಗಿ  ಸಿಲ್ಕ್ ಸೀರೆ ತೊಟ್ಟು, ಮಲ್ಲಿಗೆ  ಹಾರದಿಂದ ಹೊಳೆಯುತ್ತಿದ್ದಳು. ರಾಹುಲ್ ಕ್ರೀಮ್ ಶೆರ್ವಾನಿಯಲ್ಲಿ ನಿಂತು, ಅವಳನ್ನು ಮಾತ್ರವೇ  ನೋಡುತ್ತಿದ್ದನು.

ಅವರು ಪವಿತ್ರ ಅಗ್ನಿಯನ್ನು ಸುತ್ತುವಾಗ, ಒಂದಾದ ಕೈಗಳುಲೆಕ್ಚರ್ಗಳಲ್ಲಿ ನೋಟ್ಸ್ ಪಾಸ್ ಮಾಡಿದ ಕೈಗಳು, ಚಾಕೋಲೇಟ್ ಹಂಚಿಕೊಂಡ ಕೈಗಳುಹೊಸ ಅಧ್ಯಾಯಕ್ಕೆ ಪಯಣ ಪ್ರಾರಂಭಿಸಿದವು. ಹಳೆಯ ತಮಾಷೆಗಳು, ಹೊಸ ಸಾಹಸಗಳು, ಮತ್ತು ಕಾಲದೊಂದಿಗೆ ಕಮ್ಮಿಯಾಗದ ಪ್ರೇಮ.

ವರ್ಷಗಳ ನಂತರ

ಒಂದು ವಾರಾಂತ್ಯದ ಬೆಳಿಗ್ಗೆ, ಗಿಡಗಳು ಮತ್ತು ಪುಸ್ತಕಗಳಿಂದ ತುಂಬಿರುವ ಮನೆಯಲ್ಲಿ, ಮಾಯಾ ಫಿಲ್ಟರ್ ಕಾಫಿ ಕುಡಿಯುತ್ತಿದ್ದಳು, ರಾಹುಲ್ ಪತ್ರಿಕೆ ಓದುತ್ತಿದ್ದನು. ಅವರ ಮಗಳು, ಮೀರಾ, ನೆಲದಲ್ಲಿ ಬ್ಲಾಕ್ಗಳಿಂದ ಆಟವಾಡುತ್ತಿದ್ದಳು.

ಅಪ್ಪಾ, ನೀನು ಅಮ್ಮನನ್ನು ಹೇಗೆ ಭೇಟಿಯಾದೆ?” ಕೇಳಿದಳು ಮೀರಾ.

ರಾಹುಲ್ ಮಾಯಾಳನ್ನು  ನೋಡಿ ನಕ್ಕನು.

ನಿನ್ನ ಅಮ್ಮ ಪೆನ್  ಕೆಳಗೆ ಬಿಟ್ಟಳು…”

“…ಮತ್ತೆ ನಿನ್ನ ಅಪ್ಪಾ ಅದನ್ನು ತೆಗೆದುಕೊಳ್ಳಲು ಹೋದರು…..  ಆಮೇಲೆ ನಾವು ಒಬ್ಬರನ್ನೊಬ್ಬರು ಆಯ್ದುಕೊಂಡೆವು,” ಎಂದು ಮಾಯಾ ನಗುತ್ತಾ ಉತ್ತರಿಸಿದಳು.

ಮತ್ತೆ ಮಳೆಯೂ ಮಲ್ಲಿಗೆಯೂ ಕೂಡಿರುವ ನಗರದಲಿ, ಅವರ ಪ್ರೇಮಕಥೆ ಮುಂದುವರೆಯಿತುನೆನಪುಗಳಲ್ಲಿ, ಕ್ಷಣಗಳಲ್ಲಿ ಮತ್ತು ಮೀರಾಳ ನಗುವಿನಲ್ಲಿ.

 

ಮುಕ್ತಾಯ.

ಧನ್ಯವಾದಗಳು.....🌷🌷🌷


ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

ಹರಕೆ ಹೊತ್ತರೆ ನಿಜವಾಗಿಯೂ ಪಾಪ ತೀರಿಬಿಡುತ್ತದೆಯೇ???????

ಕವಲೊಡೆದ ಕಥೆ!!!!!!!!

“ಪೂರ್ವಜನ್ಮದ ಬಾಂಧವ್ಯ ಸ್ನೇಹ, ಅದು ನಿರ್ದಿಷ್ಟವಾದ ನೆನೆಪುಗಳ ಸಂಗ್ರಹ.” “ಕೋಪದಿಂದ ಸಂಬಂಧ ಮರೆಯಾಗುತ್ತದೆ… ಕ್ಷಮೆ ನೀಡಿದರೆ ಪ್ರೀತಿ ಪುನಃ ಹುಟ್ಟುತ್ತದೆ.”

!!! ಮೈಕ್ರೋ ಅಡ್ವೆಂಚರ್‌ಗಳು!!! ಸಣ್ಣ ಯಾನಗಳ ಮಾಹಿತಿ.......